ದೀಪಕ್ ಎಂಟರ್ಪ್ರೈಸಸ್ ಲಾಂಛನದಲ್ಲಿ ಹೆಚ್.ಎಂ.ಕೃಷ್ಣಮೂರ್ತಿ (ಜೆ.ಕೆ) ನಿರ್ಮಿಸಿರುವ ದೇವದಾಸ್ ಚಿತ್ರವು ಈ ವಾರ ರಾಜ್ಯಾದ್ಯಾಂತ ಬಿಡುಗಡೆಯಾಗಲಿದೆ. ಎ.ಬಿ.ಸಿ.ಡಿ.ಶಾಂತಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಜ್ಯೋಶ್ವ ಶ್ರೀಧರ್ ಸಂಗೀತ, ಜಿ.ರೇಣುಕುಮಾರ್ ಛಾಯಾಗ್ರಹಣ, ಎಸ್.ಮಂಜುನಾಥ್ ಸಂಭಾಷಣೆ, ಮಾಸ್ಮಾದ ಸಾಹಸ, ಶ್ಯಾಂ ಸಂಕಲನ, ನಾಗೇಂದ್ರ ಪ್ರಸಾದ್, ಎಸ್.ನಾರಾಯಣ್ ಸಾಹಿತ್ಯ, ಸದಾ, ಮುರಳಿ, ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನವಿದೆ. ಯೋಗೇಶ್, ನತನ್ಯ, ಜೆನಲ್ ಪಾಂಡೆ, ಆರತಿಪುರಿ, ರಂಗಾಯಣ ರಘು, ರಮೇಶ್ ಭಟ್, ಅರವಿಂದ್, ಪ್ರಮಿಳಾ ಜೋಷಾಯ್, ಕುಶಾಲಗೌಡ, ಕುರಿ ರಂಗು ತಾರಾಗಣದಲ್ಲಿ ಅಭಿನಯಿಸಿದ್ದಾರೆ.